Friday 18 April 2014

Whatever we did was only for 'Sowjanya'.


I could see many people vomiting so much venom on us for posting some pro Narendra Modi posts. Some are blaming we are going out of the context that the page has been misused for political gain. Some abused Sri Mahesh Shetty Thimarodi for declaring his support to Modi ji.

Let me throw few questions at you in return.

1. Apart Facebook, how many times you had involved yourself in the public protest?

2. How many times you had been to the police station to inquire about the investigation status?

3. How many times you been to Sowjanya's home to console her parents.

4. How many cases you have it on you for seeking justice for Sowjanya?

5. You must know, how Kemaru Sri and Mahesh Shetty Thimarodi struggled to bring Sowjanya case to limelight. Only they could explain the troubles they had faced. And just few posts about a party that too keeping in mind Sowjanya's Case you hall have forgot the efforts we did?

Dear abusers, we didn't limit our efforts just to Facebook. We did step down to the streets, participated in many protests as well.We had organised few protests too. We had to experience sleepless nights to do so. What we got in return was cases on us for fighting for Justice.

Our team firmly believes in Narendra Modi who can render the justice, or at least he can intervene the ongoing CBI probe. Our agenda is not carrying a basket to make money using Sowjanya's name. We have a vision. We believe that Modi Sarkar can do better to this nation, ultimately our appeal for justice will be heard.

Its easy to comment, post, abuse and harm and do anything being a 'Keyboard Warrior'. We had felt the heat of the trouble. Whenever we were pushed down to stop the campaign, we didn't give it up. Some lured us, some threatened. We didn't fall for anything. I hope one day, this page will get the justice for what it's been fighting.

Even if you think we were wrong, we beg apologies from those people who have the rights to blame us. No regrets for what we have done. Whatever we did was only for 'Sowjanya'.

Thank you!

Wednesday 16 April 2014

ಸೌಜನ್ಯಪರ ಹೋರಾಟಗಾರ ಶ್ರೀ ಮಹೇಹ್ ಶೆಟ್ಟಿ ತಿಮರೋಡಿಯ ಬೆಂಬಲ ನರೇಂದ್ರ ಮೋದಿಗೆ


ಸೌಜನ್ಯ ಸಾವಿಗೆ ನ್ಯಾಯ ಒದಗಿಸಲು ಪ್ರಜಾಪ್ರಭುತ್ವ ವೇದಿಕೆಯ ಮೂಲಕ ಹೋರಾಟವನ್ನು ನಡೆಸಿ ಸೌಜನ್ಯ ಪ್ರಕರಣ ಸಿಬಿಐ ವಶಕ್ಕೆ ಹೋಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಹೇಶ್ ತಿಮರೋಡಿ ಅವರು ಬಿಜೆಪಿಗೆ ತನ್ನ ಬೆಂಬಲವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಈ ಮೂಲಕ ಕಳೆದ ಹಲವಾರು ಸಮಯದಿಂದ ತಿಮರೋಡಿಯ ರಾಜ ಕೀಯ ನಿಲುವಿನ ಬಗ್ಗೆ ಕವಿದಿದ್ದ ಕುತೂ ಹಲದ ತೆರೆ ಸರಿದು ಹೋಗಿದೆ. ಮತ ಕೇಳಲೆಂದು ಮನೆಗೆ ಬಂದಿದ್ದ ನಳಿನ್ ಕುಮಾರ್ ಕಟೀಲ್ ಅವರಿಗೆ ಹೂವಿನ ಹಾರ ಹಾಕಿ ಸ್ವಾಗತಿಸುವ ಮೂಲಕ ತನ್ನ ಬೆಂಬಲ ಬಿಜೆಪಿಗೆ ಎನ್ನುವ ನಿಲುವನ್ನು ಪರೋಕ್ಷವಾಗಿ ರವಾನಿಸಿದ್ದರೂ, ನಿನ್ನೆ ಪತ್ರಿಕಾಗೋಷ್ಠಿಯನ್ನು ನಡೆಸಿ ತಾನು ಮೋದಿಯನ್ನು ಬೆಂಬಲಿಸುತ್ತಿದ್ದು ದೇಶದಲ್ಲಿ ಪರಿಣಾಮಕಾರಿಯಾದ ಬದಲಾವಣೆ ಆಗಬೇಕಿದೆ ಎಂದರು.
ಈ ಹಿಂದೆ ವಿಧಾನ ಸಭಾ ಚುನಾವಣಾ ಸಮಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಮಹೇಶ್ ಶೆಟ್ಟಿ ಆ ಸಮಯದಲ್ಲೇ ಎಂಟು ಸಾವಿರ ಮತಗಳನ್ನು ಪಡೆದಿದ್ದರು. ಇದೀಗ ಸೌಜನ್ಯ ಪ್ರಕರಣದಲ್ಲಿ ಅವರ ಹೋರಾಟ ತುಳುನಾಡಿನ ಜನ ಸಾಮಾನ್ಯರಲ್ಲೂ ಗಾಢವಾದ ಪರಿಣಾಮ ಬೀರಿದ್ದ ಕಾರಣ ಅವರ ಹಿಂದೆ ಜನ ಬೆಂಬಲ ಅತೀ ಹೆಚ್ಚಿತ್ತು. ಇದರ ಲಾಭವನ್ನು ಪಡೆದುಕೊಂಡು ತಿಮರೋಡಿ ಚುನಾವಣೆಗೆ ನಿಲ್ಲುತ್ತಾರೆ ಎನ್ನುವ ಪ್ರಚಾರ ಇತ್ತಾದರೂ ಈ ಬಗ್ಗೆ ಧೋರಣೆ ಹೊಂದಿರದ ಕಾರಣ ಅವರ ಬೆಂಬಲ ಯಾರಿಗೆ ಎನ್ನುವ ಕುತೂಹಲ ಸಹಜವಾಗಿಯೇ ಇದ್ದವು. ತಿಮರೋಡಿ ಅವರು ಭಾನುವಾರದವರೆಗೆ ತನ್ನ ನಿಲುವನ್ನು ಸ್ಪಷ್ಟಪಡಿಸದೇ ಇದ್ದ ಕಾರಣ ಈ ಕುತೂಹಲ ಮತ್ತಷ್ಟು ಹೆಚ್ಚಾಗಿತ್ತು. ಈ ನಡುವೆ ಮಹೇಶ್ ಶೆಟ್ಟಿ ಅವರನ್ನು ಸಿಪಿಐಎಂ ಮತ್ತು ಡಿವೈಎಫ್‍ಐ ನಾಯಕರೂ ಭೇಟಿ ಮಾಡಿದ್ದು, ಈ ಹಿಂದೆ ಸೌಜನ್ಯ ಹೋರಾಟ ನಡೆದಾಗಲೂ ಈ ಸಂಘಟನೆ ತಿಮರೋಡಿಗೆ ಬೆಂಬಲ ನೀಡಿದ್ದ ಕಾರಣ ತಿಮರೋಡಿ ಸಿಪಿಐಎಂ ಪಕ್ಷವನ್ನು ಬೆಂಬಲಿಸುತ್ತಾರೆ ಎಂದೇ ನಂಬಲಾಗಿತ್ತು. ಇದಾದ ಬಳಿಕ ಆಶ್ಚರ್ಯಕರ ಬೆಳವಣಿಗೆಯಲ್ಲಿ ನಳಿನ್ ಕುಮಾರ್ ಕಟೀಲ್ ಮತ್ತು ಕಲ್ಲಡ್ಕ ಪ್ರಭಾಕರ್ ಭಟ್ ಅವರು ತಿಮರೋಡಿ ಅವರ ಮನೆಗೆ ಭೇಟಿ ನೀಡಿದ್ದರು. ತಿಮರೋಡಿ ಅವರು ಹಾರ ಹಾಕಿ ನಳಿನ್ ಅವರನ್ನು ಸ್ವಾಗತಿಸಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. 
ಬಿಜೆಪಿ ಜಿಲ್ಲಾಧ್ಯಕ್ಷರು ಇದೊಂದು ಸಾಮಾನ್ಯ ಭೇಟಿಯೇ ವಿನಃ ತಿಮರೋಡಿ ನಮ್ಮ ಕಾರ್ಯಕರ್ತರಲ್ಲ ಎಂದಿದ್ದರು. ಇತ್ತ ಪತ್ರಿಕಾಗೋಷ್ಠಿ ನಡೆಸಿದ ತಿಮರೋಡಿ ಅವರು ನಾನು ಮೋದಿಯನ್ನು ಬೆಂಬಲಿಸುತ್ತೇನೆ ನಮ್ಮ ವೇದಿಕೆಯ ಕಾರ್ಯಕರ್ತರು ಇದೇ ನಿಲುವನ್ನು ಹೊಂದಿದ್ದಾರೆ. ಇದು ನಳಿನ್ ಭೇಟಿಗಿಂತ ಮುಂಚೆಯೂ ಇದ್ದ ಸಿದ್ಧಾಂತವೇ ಆಗಿದೆ. ಇದಕ್ಕೂ ಸೌಜನ್ಯ ಹೋರಾಟಕ್ಕೂ ಸಂಬಂಧವೇ ಇಲ್ಲ. ಅಲ್ಲದೇ ಸೌಜನ್ಯ ಹೆತ್ತವರು ಯಾವುದೇ ಪಕ್ಷವನ್ನು ಬೆಂಬಲಿಸದೇ ತಟಸ್ಥರಾಗಿದ್ದಾರೆ ಎಂದರು. ಹೀಗಾಗಿ ಈ ಘಟನೆಗೆ ವಿಶೇಷ ಅರ್ಥ ಬೇಡ ಸೌಜನ್ಯ ಹೋರಾಟದಲ್ಲಿ ಬಿಜೆಪಿ ಅಸಹಕಾರ ತೋರಿದಾಗ ಖಂಡಿಸಿದ್ದೇನೆ. ಮುಂದೆಯೂ ಖಂಡಿಸುತ್ತೇನೆ. ಆದರೆ ದೇಶದ ನಾಯಕತ್ವ ಮೋದಿಗೆ ಸಿಗಬೇಕು ಎನ್ನುವ ಕಾರಣಕ್ಕೆ ಬಿಜೆಪಿಯನ್ನು ಬೆಂಬಲಿಸುವುದಾಗಿ ತಿಳಿಸಿದರು. ವಸಂತ ಬಂಗೇರ ಅವರು ಸೌಜನ್ಯ ಹೋರಾಟದಲ್ಲಿ ಬೆಂಬಲವನ್ನು ನೀಡಿದ್ದಾರೆ. ಏಕೆಂದರೆ ಅದರಲ್ಲಿ ಅವರ ಸ್ವಾರ್ಥವೂ ಇತ್ತು, ಆದರೆ ಇತ್ತೀಚೆಗೆ ಅವರೂ ನುಣುಚಿಕೊಳ್ಳುತ್ತಿದ್ದಾರೆ. ನನ್ನ ರಾಜಕೀಯ ನಿಲುವೇ ಬೇರೆ ಹೋರಾಟದ ನಿಲುವೇ ಬೇರೆ ಯಾರೂ ಇಲ್ಲವಾದರೂ ನಾನು ಹೋರಾಡುತ್ತೇನೆ ಎಂದರು.
ಸಿಬಿಐಗೆ ಒಪ್ಪಿಸಿದ್ದು ರಾಜ್ಯ ಸರಕಾರ ಅಲ್ಲ: ತಿಮರೋಡಿ 
ಪ್ರಜಾಪ್ರಭುತ್ವ ವೇದಿಕೆ ಸೌಜನ್ಯ ಸಾವಿಗೆ ನ್ಯಾಯ ಒದಗಿಸಲು ಹೋರಾಟವನ್ನು ಆರಂಭಿಸಿದ ಬಳಿಕ ರಾಜ್ಯಾದ್ಯಂತ ಹೋರಾಟಗಳೇ ನಡೆದಿದ್ದವು, ದೇಶದ ಹಲವಾರು ಕಡೆ ವಿದ್ಯಾರ್ಥಿಗಳೂ ಬೀದಿಗಿಳಿದು ಹೋರಾಟ ನಡೆಸಿದ್ದರಲ್ಲದೆ ಸೌಜನ್ಯ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿದ್ದರು. ಪರಿಣಾಮ ಪ್ರಕರಣ ಸಿಬಿಐಗೆ ಹಸ್ತಾಂತರವಾಗಿತ್ತು. ಇದೀಗ ಈ ಬಗ್ಗೆ ಪ್ರತಿಕ್ರಿಯೇ ನೀಡಿದ ತಿಮರೋಡಿ ಅವರು ರಾಜ್ಯ ಸರಕಾರ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿಲ್ಲ, ಬದಲಾಗಿ ಬೇರೆ ಪ್ರಕರಣದ ವಿಚಾರಣೆಗೆ ಜಿಲ್ಲೆಗೆ ಬಂದಿದ್ದ ಸಿಬಿಐ ತಂಡದ ಅಧಿಕಾರಿ ಇಲ್ಲಿ ಸೌಜನ್ಯಳ ಸಾವಿನ ಬಗ್ಗೆ ಅಕ್ರೋಶ ವ್ಯಕ್ತ ಪಡಿಸಿ ನ್ಯಾಯ ಕೋರಿ ಹಾಕಿದ್ದ ಬ್ಯಾನರ್‍ಗಳನ್ನು ಗಮನಿಸಿ ಪ್ರಕರಣದ ಬಗ್ಗೆ ತಿಳಿದುಕೊಂಡು ಸ್ವಯಂಪ್ರೇರಿತರಾಗಿ ಈ ಪ್ರಕರಣವನ್ನು ವಿಚಾರಣೆಗೆ ಪಡೆದುಕೊಂಡಿದ್ದಾರೆಯೇ ವಿನಃ ಇದು ಸರಕಾರದಿಂದ ಆಗಿರುವ ಕೆಲಸ ಅಲ್ಲ ಎಂದಿದ್ದಾರೆ.
ಕೃಪೆ : ಜಯಕಿರಣ 

Thursday 3 April 2014

ಸೌಜನ್ಯ ಕೊಲೆ ಪ್ರಕರಣ: ಸಿಬಿಐ ಬಿರುಸಿನ ತನಿಖೆ ಆರಂಭ


ಬೆಳ್ತಂಗಡಿ, ಏ 2: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಿರುಸಿನ ತನಿಖೆ ಆರಂಭಿಸಿದೆ. ಸೌಜನ್ಯ ಕೊಲೆ ಪ್ರಕರಣದ ನಿಜವಾದ ಆರೋಪಿಯನ್ನು ಸಿಬಿಐ ಅಧಿಕಾರಿಗಳು ಸದ್ಯದಲ್ಲೇ ಬಂಧಿಸಲಿದ್ದಾರೆನ್ನುವ ಬಿಸಿಬಿಸಿ ಚರ್ಚೆ ಬೆಳ್ತಂಗಡಿ ಭಾಗದಲ್ಲಿ ನಡೆಯುತ್ತಿದೆ.

ಚೆನ್ನೈ ನಿಂದ ಬಂದ ಏಳು ಜನರ ಅಧಿಕಾರಿಗಳ ತಂಡ ಜಿಲ್ಲಾ ಪರಿವೀಕ್ಷಣಾ ಮಂದಿರದಲ್ಲಿ (IB) ತಂಗಿದ್ದು, ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಕುಟುಂಬದವರನ್ನು ಮತ್ತು ಆರೋಪಿ ಪಟ್ಟಿಯಲ್ಲಿ ದಾಖಲಾಗಿರುವವರನ್ನು ಒಬ್ಬೊಬ್ಬರಾಗಿ ವಿಚಾರಣೆ ನಡೆಸಲಾರಂಭಿಸಿದ್ದಾರೆ.

ಸೌಜನ್ಯ ತಂದೆ, ತಾಯಿ ಕುಸುಮ, ಮಾವ ವಿಠಲ ಪೂಜಾರಿ ಸೇರಿದಂತೆ ಹಲವರನ್ನು ಸಿಬಿಐ ಈಗಾಗಲೇ ವಿಚಾರಣೆಗೊಳಪಡಿಸಿ ಮಾಹಿತಿ ಸಂಗ್ರಹಿಸಿದೆ. ತನಿಖಾ ಅಧಿಕಾರಿಗಳ ಜೊತೆ ಜಸ್ಟಿಸ್ ಸುಬ್ರಮಣ್ಯೇಶ್ವರ ರಾವ್ ಕೂಡಾ ಇದ್ದು ಎರಡು ದಿನ ಸಿಬಿಐ ಅಧಿಕಾರಿಗಳು ಆರೋಪಿ ಪಟ್ಟಿಯಲ್ಲಿರುವವರನ್ನು ವಿಚಾರಣೆ ನಡೆಸುವ ವೇಳೆ ಅಧಿಕಾರಿಗಳಿಗೆ ಸಹಕರಿಸಿದ್ದಾರೆ. ಸೌಜನ್ಯ ಶವ ಪತ್ತೆಯಾದ ಜಾಗಕ್ಕೆ ಸಿಬಿಐ ಅಧಿಕಾರಿಗಳು ಈಗಾಗಲೇ ಭೇಟಿ ನೀಡಿದ್ದಾರೆ. ಇದಲ್ಲದೇ, ಈ ಭಾಗದಲ್ಲಿನ 450ಕ್ಕೂ ಹೆಚ್ಚು ಅಸಹಜ ಸಾವು ಪ್ರಕರಣಗಳ ಬಗ್ಗೆ ಕೂಡಾ ಸಿಬಿಐ ತನಿಖೆ ನಡೆಸಲಿದೆ. ಯಾರ ಒತ್ತಾಯಕ್ಕೂ ಮಣಿಯದೆ ಸಿಬಿಐ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಸೌಜನ್ಯಳನ್ನು ಕೊಂದವರಿಗೆ ಶಿಕ್ಷೆಯಾಗಬೇಕು, ಹೆತ್ತವರಿಗೆ ನ್ಯಾಯ ಸಿಗಬೇಕು. ಈ ಪ್ರಕರಣವನ್ನು ಸರಕಾರ ಸಿಬಿಐಗೆ ವಹಿಸ ಬೇಕೆಂದು ವಿವಿಧ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು. (ಕೇಮಾರು ಶ್ರೀ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ವಿಶೇಷ ಸಂದರ್ಶನ)

ಪ್ರತಿಭಟನೆಯ ಬಿಸಿಗೆ ಕೊನೆಗೂ ಮಣಿದಿದ್ದ ಸರಕಾರ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಪ್ರಕರಣವನ್ನು ಸಿಬಿಐಗೆ ಅಧಿಕೃತವಾಗಿ ವರ್ಗಾಯಿಸಿತ್ತು. ಕಳೆದ ವರ್ಷ ಅಕ್ಟೋಬರ್ 31ರಂದು ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ತನಿಖಾ ವರದಿಯನ್ನು ಸಲ್ಲಿಸಿದ್ದರು. 12 ಪುಟಗಳ ತನಿಖಾ ವರದಿಯಲ್ಲಿ ಸೌಜನ್ಯ ಮೇಲೆ ಅತ್ಯಾಚಾರ ಯತ್ನ ಹಾಗೂ ಹತ್ಯೆ ಮಾಡಿರೋದು ಆರೋಪಿ ಸಂತೋಷ್ ರಾವ್ ಎಂದು ನಮೂದಿಸಿದ್ದ ಸಿಐಡಿ ಅಧಿಕಾರಿಗಳು ವರದಿಯನ್ನು ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೆ ನೀಡಿ, ಪ್ರಕರಣದ ಬಗ್ಗೆ ಅಗತ್ಯವಿದ್ದರೆ ಸಿಬಿಐ ತನಿಖೆ ನಡೆಸಬಹುದು ಎಂದು ಶಿಫಾರಸು ಮಾಡಿದ್ದರು. ಸಿಐಡಿ ಅಧಿಕಾರಿಗಳು ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿನ 12 ಸಾಕ್ಷ್ಯಗಳ ವಿಚಾರಣೆ ಬಳಿಕ ಆರೋಪಿಗಳಾಗಿದ್ದ ನಿಶ್ಚಲ್ ಜೈನ್, ಧೀರಜ್ ಜೈನ್, ಉದಯ್ ಜೈನ್, ಮಲ್ಲಿಕ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು ಮತ್ತು ಪೊಲೀಸರು ಬಂಧಿಸಿರುವ ಆರೋಪಿ ಸಂತೋಷ್ ರಾವ್ ಕೊಲೆ ಮಾಡಿರುವುದು ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು. ಸಿಐಡಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದ್ದಂತೆ ವಿವಿಧ ಸಂಘಟನೆಗಳು ಮತ್ತು ಸೌಜನ್ಯ ಪೋಷಕರು ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸದೇ ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂದು ಆರೋಪಿಸಿದ್ದರು. ನ.3ರಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ, ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ-ಕೊಲೆ ಪ್ರಕರಣದ ಸಿಐಡಿ ತನಿಖೆ ಮತ್ತು ತನಿಖಾ ವರದಿ ಕುರಿತು ಸ್ಥಳೀಯರ ಮನಸ್ಸಿನಲ್ಲಿ ಇನ್ನೂ ಗೊಂದಲವಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ಆಗಬೇಕೆಂದು ಅಪೇಕ್ಷಿಸುತ್ತಿದ್ದಾರೆ. ಆದ್ದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕೆಂದು ಪತ್ರ ಬರೆದಿದ್ದರು.

Via: One India